
ಬೆಂಗಳೂರು ಕಾಲ್ತುಳಿತಕ್ಕೆ ಸಿಎಂ, ಡಿಸಿಎಂ ನೇರ ಕಾರಣ, ಕೇಂದ್ರ ಸಚಿವ ಜೋಶಿ
ಧಾರವಾಡ: ಬೆಂಗಳೂರು ಕಾಲ್ತುಳಿತ ಪ್ರಕರಣ ವಿಚಾರದಲ್ಲಿ ಸರ್ಕಾರ ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಇದು ಸಿದ್ಧಗೊಂಡಿರುವ ಸತ್ಯ ಇದೆ.ಕೋರ್ಟ್ ನಲ್ಲಿ ಸಾಬೀತ ಆಗಿಲ್ಲ ಅನ್ನೋದ ಬಿಟ್ರೆ ಎಲ್ಲವೂ ಸತ್ಯ, ಪೊಲೀಸರು ಮೊದಲೇ ಅನುಮತಿ ನಿರಾಕರಿಸಿದ್ದರು ಈ ಬಗ್ಗೆ ನನಗೆ ಖಚಿತ ಮಾಹಿತಿ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಪೊಲೀಸ್ ಆಯುಕ್ತ ದಯಾನಂದ ಸಿಎಂಗೆ, ಒಂದೇ ದಿನದಲ್ಲಿ ಭದ್ರತೆ ವ್ಯವಸ್ಥೆ ಆಗೋದಿಲ್ಲ ಎಂದಿದ್ದರು, ಆದ್ರು ಸಿಎಂ ಅನುಮತಿ ನೀಡಿದ್ದಾರೆ. ಜನ ರಾತ್ರಿಯಲ್ಲ ದೊಡ್ಡ ಪ್ರಮಾಣದಲ್ಲಿ ಕುಡಿದು ಕುಪ್ಪಳಿಸಿದ್ದರು ಅದನ್ನು ನಿರ್ವಹಿಸೋದೇ ಪೊಲೀಸರಿಗೆ ಸಾಕಾಗಿತ್ತು. ಪೊಲೀಸ್ ಆಯುಕ್ತರು ಬೆಳಗಿನ ಬ್ರಿಫೀಂಗ್ಗೆ ಸಹ ಹೋಗಿರಲಿಲ್ಲ, ತಯಾರಿ ನೋಡಿ ಸಿಎಂಗೆ ಆಯುಕ್ತರು ಭದ್ರತೆ ಆಗೋದಿಲ್ಲ ಎಂದಿದ್ದರು, ಸಿಎಂ ಬೇಜವಾಬ್ದಾರಿ ತೋರಿದ್ದಾರೆ. ಸಿಎಂ-ಡಿಸಿಎಂ ಪೈಪೋಟಿಯಲ್ಲಿ ಅನುಮತಿ ಕೊಡಿಸಿದ್ದಾರೆ, ತಮ್ಮ ಮೇಲೆ ಆರೋಪ ಜಾಡಿಸಲು ಅಧಿಕಾರಿಗಳನ್ನ ಅಮಾನತ ಮಾಡಿದ್ದಾರೆ ಇದನ್ನು ನಾವು ಒಪ್ಪುವುದಿಲ್ಲ ಎಂದರು.

ಗೋವಿಂದರಾಜ್ ತೆಗೆದಿದ್ದು ಯಾಕೆ, ಏನಾದರೂ ತಪ್ಪು ಮಾಡಿರಬಹುದಲ್ವಾ, ಹಾಗಿದ್ರೆ ಅವರ ಮೇಲೆ ಯಾಕೆ FIR ಇಲ್ಲ ಎಂದು ಜೋಶಿ ಅವರು ಪ್ರಶ್ನೆ ಮಾಡಿದರು.ಇವರಿವರನ್ನು ಸಸ್ಪಂಡ್ ಮಾಡಿ ಜನರಿಂದ ಮರೆಸುವ ಕೆಲಸ ಮಾಡುತ್ತಿದ್ದಾರೆ.ಜನ ಇದನ್ನು ಮರೆಯುವುದಿಲ್ಲ, ಸಿಎಂ, ಡಿಸಿಎಂ ಪೈಪೋಟಿಯಲ್ಲಿ ಹೀಗೆ ಮಾಡಿದ್ದಾರೆ. ಇನ್ನ ಸಿಎಂ, ಸೇರಿದಂತೆ ಮಂತ್ರಿಗಳ ಮಕ್ಕಳು ಸಹ ವಿಧಾನಸೌಧ ಎದುರು ಸೆಲ್ಫಿ ತಗಿದುಕೊಂಡಿದ್ದಾರೆ. ಇದಕ್ಜೆ ವಿಧಾನಸೌಧಕ್ಕೆ ಅನುಮತಿ ಕೊಟ್ಟಿದ್ದು ಯಾರು ನೂರಾರು ಜನ ವೇದಿಕೆಯಲ್ಲಿದ್ದರು, ಸಿಎಂ ಹುದ್ದೆಗೆ ನಮಗೆ ಗೌರವ ಇದೆ.ಸಿಎಂ ಇರೋ ವೇದಿಕೆಯಲ್ಲಿ ಹೀಗೆಲ್ಲ ಮಾಡಿದ್ದು ಎಷ್ಟು ಸರಿ, ಇದಕ್ಕೆ ಯಾರು ಹೊಣೆ, ಅಲ್ಲದೆ ಇದರ ಮೇಲೆ ಯಾಕೆ ಕ್ರಮ ಇಲ್ಲ ಎಂದರು.ಮಧ್ಯಾಹ್ನ 3.10ಕ್ಕೆ ಬೋರಿಂಗ್ ಆಸ್ಪತ್ರೆಯಲ್ಲಿ ಮೊದಲ ನಿಧನ ಆಯ್ತು, ಆದದ ಬಳಿಕವೂ ಕಾರ್ಯಕ್ರಮ ಮಾಡಿದ್ರು, ಸಿಎಂ, ಡಿಸಿಎಂಗೆ ನಾಚಿಕೆ ಬರೋಲ್ವಾ? ಉನ್ನತ ಅಧಿಕಾರಿಗಳು ಏನ ಮಾಡತಾ ಇದ್ರು, ಇದಕ್ಕೆಲ್ಲ ಕೋರ್ಟ್ ಕಠಿಣ ಕ್ರಮ ಕೈಗೊಳ್ಳಲಿದೆ. ಸರ್ಕಾರದಲ್ಲಿ ಈಗ ಇರೋರು ಮುಂದುವರಿಯೋಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವರು ಸಿಎಂ ನ ತರಾಟಗೆ ತೆಗಿದುಕೊಂಡರು..