
ಬಿಜೆಪಿ ಧಾರವಾಡ ಗ್ರಾಮೀಣ -71 ಮಂಡಲ ವತಿಯಿಂದ ಪಂಜಿನ ಮೆರವಣಿಗೆ
ಧಾರವಾಡ: ಅಮ್ಮಿನಭಾವಿ ಗ್ರಾಮದಲ್ಲಿ ಬಿಜೆಪಿ ಗ್ರಾಮೀಣ -71 ಮಂಡಲ ವತಿಯಿಂದ ಪಂಜಿನ ಮೆರವಣಿಗೆ ಇಟ್ಟುಕೊಳ್ಳಲಾಗಿತು.. ಕಾರಣ ಭಾರತ ದೇಶದ ಮಾಜಿ ಪ್ರಧಾನ ಮಂತ್ರಿಗಳಾದ ಇಂದಿರಾಗಾಂಧಿಯವರು ಭಾರತದ ಸಂವಿಧಾನಕ್ಕೆ “ತುರ್ತು ಪರಿಸ್ಥಿತಿ” (ಎಮರ್ಜೆನ್ಸಿ) ಹೇರಿ ಭಾರತದ ಕಾನೂನನ್ನು ಬುಡುಮೇಲು ಮಾಡಿದ್ದಕ್ಕೆ ,50 ವರ್ಷ ಆಗಿದೆ.ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭಾರತದಲ್ಲಿ “ತುರ್ತು ಪರಿಸ್ಥಿತಿ” ಜಾರಿ ಮಾಡಿ ಸಂವಿಧಾನದ ಹತ್ಯೆ ಮಾಡಿ 50 ವರ್ಷಗಳು ಕಳೆದರು. ಕರಾಳ ದಿನಗಳ ನೆನಪು ಇನ್ನೂ ಭಾರತದ ಮಾನಸದಲ್ಲಿ, ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿದೆ. ನಾಗರಿಕ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯಮೇಲೆ ನಿರ್ಬಂಧ, ಲಕ್ಷಾಂತರ ರಾಜಕೀಯ ಕಾರ್ಯಕರ್ತರ ಬಂಧನ, ಭಾರತದ ಗಣತಂತ್ರದ ಮೌಲ್ಯಗಳ ಕಗ್ಗೋಲೆಗೆ ಸಾಕ್ಷಿಯಾಯಿತು. ಇಡಿ ವಿಶ್ವವೇ ಈ ನಾಗರಿಕ ಸ್ವಾತಂತ್ರ್ಯದ ದಮನವನ್ನು ಖಂಡಿಸಿತು.ತುರ್ತು ಪರಿಸ್ಥಿತಿಗೆ 50 ವರ್ಷ ಕಳೆದರು ಇಂದಿಗೂ ಜೂನ್, 25 ಕರಾಳ ದಿನವಾಗಿ, ಸಂವಿಧಾನ ಹತ್ಯೆಯ ದಿನವಾಗಿ ಇತಿಹಾಸದಲ್ಲಿ ಉಳಿದಿದೆ. ತುರ್ತುಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ಹೋರಾಡಿದವರಿಗೆ “ಪಂಜಿನ ಮೆರವಣಿಗೆ” ಮುಖಾಂತರ ನಮನಗಳನ್ನು ಸಲ್ಲಿಸಲಾಯಿತು .ಈ ಒಂದು ಪಂಜಿನ ಮೆರವಣಿಗೆಯಲ್ಲಿ ಮಾಜಿ ಶಾಸಕ ಅಮೃತ್ ದೇಸಾಯಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಕುಂದಗೋಳಮಠ, ಮಂಡಲ ಅಧ್ಯಕ್ಷ ಶಂಕರ ಕೋಮಾರದೇಸಾಯಿ, ಸೇರಿದಂತೆ ಇತರೆ ಮುಖಂಡರು ಭಾಗಿಯಾಗಿದ್ದರು..
