ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕ ಭವನದಲ್ಲಿ ಇರಿಸಲಾಗಿದ್ದ 101 ಲ್ಯಾಪ್ಟಾಪ್ ಕಳ್ಳತನವಾದ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಇನ್ಸಪೆಕ್ಟರ್ ಸುರೇಶ ಯಳ್ಳೂರ ನೇತೃತ್ವದ ತಂಡ ಆರು ಜನ ಇಲಾಖೆಯ ಸಿಬ್ಬಂದಿ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಸಿಬ್ಬಂದಿ ಸೇರಿ ಒಟ್ಟೂ 26 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲ್ಯಾಪ್ಟಾಪ್ ಗಳನ್ನು ಹಾವೇರಿ ಜಿಲ್ಲೆಯ ಕಾರ್ಮಿಕರ ಮಕ್ಕಳಿಗೆ ನೀಡುವುದಕ್ಕಾಗಿ ಬೆಳಗಾವಿಯಿಂದ ತಂದು ಕಾರ್ಮಿಕ ಇಲಾಖೆಯಲ್ಲಿ ಇಡಲಾಗಿತ್ತು. ಅಗಸ್ಟ ತಿಂಗಳಿನಲ್ಲಿ ಪರಿಶೀಲನೆ ಮಾಡಿದಾಗ ಸುಮಾರು 55 ಲಕ್ಷದ ಕಿಮ್ಮತ್ತಿನ 101 ಲ್ಯಾಪಟಾಪ್ ಕಳುವಾಗಿದೆ ಎಂಬುದು ಬೆಳಕಿಗೆ ಬಂದಿದೆ. ಈ ಕುರಿತು ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುರೇಶ್ ಯಳ್ಳೂರ ಹಾಗೂ ಅವರ ತಂಡ ತನಿಖೆ ನಡೆಸಿದಾಗ ಅದೇ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣ ಕಬ್ಬೇರ ಮತ್ತು ದೀಪಕ ನಾಯಕ ಎಂಬುವರು ಕಳ್ಳತನ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ತನಿಖೆ ಮುಂದುವರಿಸಿದಾಗ ಇವರಿಗೆ ಸಹಾಯ ಮಾಡಿದ್ದ ಇಬ್ಬರು ಎಸ್ ಡಿ ಎ ಹಾಗೂ ಗುತ್ತಿಗೆ ಆದರದ ಮೇಲೆ ಕೆಲಸ ಮಾಡುತಿದ್ದ 4 ಜನ ಸಿಬ್ಬಂದಿಗಳ ಕೈವಾಡ ಇರುವುದು ಬೆಳಕಿಗೆ ಬಂದಿದೆ.
ಆರು ತಿಂಗಳ ಅವಧಿಯಲ್ಲಿ ಒಟ್ಟು 101 ಲ್ಯಾಪ್ ಟಾಪ್ ಗಳನ್ನ ಕಿಟಕಿಯ ಮೂಲಕ ಕಳುವು ಮಾಡಿದ್ದಾರೆ. ಕಳ್ಳತನ ಮಾಡಿದ ಲ್ಯಾಪ್ಟಾಪ್ ಗಳನ್ನು ಇಲಾಖೆದವರೆ ಮಾರಾಟ ಮಾಡುವುದಕ್ಕೆ ಹೇಳಿದ್ದಾರೆ ಅಂತ ಮಾರಾಟ ಮಾಡಿದ್ದು, ಇದರಲ್ಲಿ 16 ಜನ ಲ್ಯಾಪ್ ಟಾಪ್ ಕಳ್ಳತನಕ್ಕೆ ಪ್ರೇರಣೆ ನೀಡಿದವರನ್ನು ಸೇರಿಸಿ ಒಟ್ಟ 26 ಜನರನ್ನು ಬಂಧನ ಮಾಡಿದ್ದಾರೆ.
ದೀಪಕ ನಾಯಕ್, ಕೃಷ್ಣಾ ಕಬ್ಬೇರ್, ಸುಭಾಷ್ ಕುರಡಿಕೇರಿ, ಶ್ರೀನಿವಾಸ ಕೌಡೆನ್ನಣ್ಣವರ, ಸಾಯಿನಾಥ್ ಕೊರವರ, ನಾಗರಾಜ್ ಅಂಬೀಗೇರ್, ಪ್ರಕಾಶ ನಿಟ್ಟೂರ, ರುತಿಕ ಕ್ಯಾರಕಟ್ಟಿ, ಫೈರೋಜ್ ಕೊಳ್ಳೂರ, ಮಲ್ಲಿಕಾರ್ಜುನ ಹಂಚಿನಾಳ, ಮೇಗನ್ ಕಠಾರೆ, ಅರ್ಜುನ್ ವಾಲೀಕಾರ್, ದಾದಾಪೀರ್ ಮುಜಾಹಿದ್, ವಿನಾಯಕ ಹಿರೇಮಠ, ರಾಹುಲ್ ಕಮಡೊಳ್ಳಿ, ಅಭಿ ಚಲವಾದಿ, ಮಾಂತೇಶ್ ಇಜಾರದ, ಸುನೀ ಹುಬ್ಬಳ್ಳಿ, ಪ್ರಜ್ವಲ್ ಬಾಗಲಕೋಟ, ಹರೀಶದ ಸಗಡಿ, ರಂಜಾನ್ ಹಂಪಿಹೊಳ್ಳಿ, ಮಂಜುನಾಥ ಕ್ಯಾರಕಟ್ಟಿ, ನಾಗರಾಜ್ ಸರವಿ, ದರ್ಶನ ಲಗಟಗೇರಿ, ಚನ್ನಬಸಪ್ಪ ಬಿಸರಳ್ಳಿ, ರೇಣುಕಾ ಬಿಸರಳ್ಳಿ ಇವರು ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 45 ಲಕ್ಷ ರೂ. ಮೌಲ್ಯದ 83 ಲ್ಯಾಪ್ಟಾಪ್ ಗಳು, ಕೃತ್ಯಕ್ಕೆ ಬಳಸಿದ 1 ಕಾರ್, 2 ಆಟೋ, 2 ಬೈಕ್ ಸೇರಿ ಒಟ್ಟು 60 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಲ್ಯಾಪ್ಟಾಪ್ ಕಳ್ಳತನ ಪ್ರಕರಣವನ್ನು ಬೇಧಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳ ಕಾರ್ಯಕ್ಕೆ ಪೋಲಿಸ್ ಆಯುಕ್ತ ಎನ್ ಶಶಿಕುಮಾರ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.