
ಹೆಸರು: ಪ್ರಶಾಂತ ಎಂ ದಿನ್ನಿ
ತಂದೆ: ಮಾರುತಿ ಭೀಮಪ್ಪ ದಿನ್ನಿ
ತಾಯಿ: ಶಾಂತಾ ಮಾರುತಿ ದಿನ್ನಿ
ಹೆಂಡತಿ: ಅಕ್ಕಮ್ಮ ಪ್ರಶಾಂತ ದಿನ್ನಿ
ಮಕ್ಕಳು: ಸ್ನೇಹಲ್ , ಯುವರಾಜ, ಪೃಥ್ವಿ
ಜನನ: 01/06/1981
ಜನನ ಸ್ಥಳ: ಧಾರವಾಡ
ವಿಧ್ಯಾರ್ಹತೆ: ಬಿ.ಎ ಪದವೀಧರರು
ಮಾಧ್ಯಮದ ಅನುಭವ : 20 ವರ್ಷದಿಂದ ಮಾದ್ಯಮದಲ್ಲಿ ಸೇವೆ

ಆರಂಭದಲ್ಲಿ ಧಾರವಾಡದ ಸ್ಥಳೀಯ ಚಾನಲ್ ನಲ್ಲಿ ಕೆಲಸ ಆರಂಭ, ಬಳಿಕ ಡಿಡಿ1, ಡಿಡಿ ಚಂದನ, ಉದಯ ಟಿವಿ ಹಾಗೂ ಪಬ್ಲಿಕ್ ಟಿವಿ, ಬಿ ಟಿವಿ ಸೇರಿದಂತೆ ವಿಸ್ತಾರ ನ್ಯೂಸ್ ಹಾಗೂ ಪ್ರಸ್ತುತ ರಾಜ್ ನ್ಯೂಸನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ ಭಾಜನರಾಗಿದ್ದಾರೆ,.
ಸ್ಥಳೀಯ ಸಮಸ್ಯೆಗಳ ಬಗ್ಗೆ ರಾಜಕಾರಣಿಗಳ ಗಮನ ಸೆಳೆಯುವ ಮೂಲಕ ಅದ್ಬುತ ದೃಶ್ಯಗಳನ್ನ ಸೆರೆಹಿಡಿದು, ಜನರ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಪ್ರಶಾಂತ್ ರ ಚಾಕಚಕ್ಯತೆಯ ದೃಶ್ಯಗಳು ಸಾಕ್ಷಿಯಾಗಿವೆ..ರಸ್ತೆ, ನೀರು, ಶಾಲಾ ಕಟ್ಟಡಗಳು, ಸಾಧಕರ ಬದುಕು, ನಿಸರ್ಗ, ಪ್ರಕೃತಿ ವಿಕೋಪ ಸೇರಿದಂತೆ ಜನರಿಗೆ ಸಿಗುವ ಮೂಲಭೂತ ಸಮಸ್ಯೆಗಳ ಬಗ್ಗೆ ಪ್ರಶಾಂತ್ ಅವರ ಕ್ಯಾಮರ ಕೈಚಳಕ ನಮ್ಮ ಕಣ್ಮುಂದೆಯೇ ಇವೆ.. ಸದ್ಯ ಕ್ಯಾಮರಾಮನ್ ಹುದ್ದೆಯಿಂದ ಬಡ್ತಿ ಪಡೆದು ರಾಜ್ ನ್ಯೂಸ್ ನ ಜಿಲ್ಲಾ ವರದಿಗಾರಾಗಿರುವ ಪ್ರಶಾಂತ್ ರಿಗೆ ನಮ್ಮ ಕಡೆಯಿಂದ ಪ್ರೀತಿಯ ಗೌರವದ ಸನ್ಮಾನ





