
ಧಾರವಾಡದಲ್ಲಿ ನಡೆಯುತ್ತಿರುವ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾದ ಕನ್ನಡ ಗಾನ ಕೌಸ್ತುಭ ಸ್ಪರ್ಧೆಯ ಆಡಿಷನ್ ಇಂದಿನಿಂದ ಆರಂಭವಾಗಿದೆ.ಧಾರವಾಡ ಕರೋಕೆ ವತಿಯಿಂದ ಪ್ರತಿ ವರ್ಷ ಆಯೋಜಿಸಲ್ಪಡುವ ಕನ್ನಡ ಗಾನ ಕೌಸ್ತುಭ ಕಾರ್ಯಕ್ರಮದ ಆಡಿಷನ್ ಈ ಬಾರಿ ಎರಡು ದಿನಗಳ ಕಾಲ ನಡೆಯಲಿದೆ.ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಪ್ರತಿಭಾವಂತ ಸ್ಪರ್ಧಾರ್ಥಿಗಳು ತಮ್ಮ ಗಾಯನ ಕೌಶಲ್ಯ ಪ್ರದರ್ಶಿಸುತ್ತಿದ್ದಾರೆ.ಈ ವೇದಿಕೆ ಅನೇಕ ಹೊಸ ಕಂಠಗಳಿಗೆ ಪ್ರೇರಣೆ ನೀಡಿದ್ದು, ಕನ್ನಡ ಸಂಗೀತ ಪ್ರೇಮಿಗಳಿಗೆ ಹಬ್ಬದ ಸಂಭ್ರಮದಂತಾಗಿದೆ.ಸಂಸ್ಥೆಯ ಮುಖ್ಯಸ್ಥರು ಮೈನುದಿನ್ ಕಿರವಾಡಿ ಅವರು ಮಾತನಾಡಿ “ಆಡಿಷನ್ನಲ್ಲಿ ಭಾಗವಹಿಸಲು ಇಚ್ಛಿಸುವವರು ಧಾರವಾಡಕ್ಕೆ ಬಂದು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು” ಎಂದು ತಿಳಿಸಿದ್ದಾರೆ. ಧಾರವಾಡದ ವೇದಿಕೆಯಲ್ಲಿ ಮತ್ತೆ ಮೊಳಗುತ್ತಿದೆ – ಕನ್ನಡದ ನಾದ!





