
ಹುಬ್ಬಳ್ಳಿ: ರೈತರಿಗೆ ಯೂರಿಯಾ ಗೊಬ್ಬರ ಸಿಗದೇ ಇರುವುದಕ್ಕೆ ಕೇಂದ್ರದತ್ತ ಬೊಟ್ಟು ಮಾಡುತ್ತಿರುವುದು ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರಕ್ಕೆ ಶೋಭೆ ತರುವುದಿಲ್ಲ. ರೈತರ ಬೇಡಿಕೆ ಈಡೇರಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಉದ್ದೇಶದಿಂದ “ಬೆಂಕಿ ಹತ್ತಿದಾಗ ಬಾವಿ ತೋಡುವ” ಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಆರೋಪಿಸಿದ್ದಾರೆ.ರಾಜ್ಯದಲ್ಲಿ ರೈತರಿಗೆ ಎಷ್ಟು ಪ್ರಮಾಣದ ಗೊಬ್ಬರ ಬೇಕು ಎಂಬುದನ್ನ ರಾಜ್ಯ ಸರಕಾರ ಕೇಂದ್ರಕ್ಕೆ ಕೇಳಿಕೊಳ್ಳಬೇಕು. ಆದರೆ, ರಾಜ್ಯ ಅದನ್ನ ಮಾಡದೇ, ಕೇಂದ್ರದ ಮೇಲೆ ಗೂಬೆ ಕೂರಿಸುವ ಯತ್ನ ನಡೆಸುತ್ತಿದೆ ಎಂದಿದ್ದಾರೆ.ರಾಜ್ಯದಲ್ಲಿ ರೈತರ ಮೇಲೆ ಗೋಲಿಬಾರ್, ರೈತರ ಮೇಲೆ ಲಾಠಿಚಾರ್ಜ್, ರೈತರ ಮೇಲೆ ನೂರಾರೂ ಪ್ರಕರಣ ದಾಖಲಿಸಿದ್ದು ಯಾವ ಪಕ್ಷದವರು ಎಂಬುದು ರೈತರಿಗೆ ಗೊತ್ತಿರುವ ವಿಷಯ. ರಾಜ್ಯದ ಕಾಂಗ್ರೆಸ್ ಸರಕಾರ ಕೇಂದ್ರದ ಮೇಲೆ ಕೂರಿಸುವುದನ್ನ ಬಿಟ್ಟು ರೈತರಿಗೆ ಬೇಕಾದ ಗೊಬ್ಬರದ ಬೇಡಿಕೆಯನ್ನ ಈಡೇರಿಸಬೇಕು ಎಂದು ಒತ್ತಾಯಿಸಿದರು.ರೈತರ ಬೇಡಿಕೆಗೆ ಅನುಗುಣವಾಗಿ ಗೊಬ್ಬರ ಸಿಗದೇ ಹೋದರೆ, ರೈತರ ಜೊತೆ ತಾವೂ ಹೋರಾಟದ ಹಾದಿ ಹಿಡಿಯಬೇಕಾಗತ್ತೆ ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಎಚ್ಚರಿಸಿದ್ದಾರೆ.ಕಳೆದ ಎರಡೂವರೆ ವರ್ಷದಿಂದ ರೈತರು ಬೆಳೆಹಾನಿ, ಬೆಳೆ ಪರಿಹಾರ ಮತ್ತೂ ಬಿದ್ದ ಮನೆಗಳಿಗೆ ಪರಿಹಾರ ಕೊಡಲು ಆಗುತ್ತಿಲ್ಲ. ಎಲ್ಲವಕ್ಕೂ ‘ಗ್ಯಾರಂಟಿ’ ಎನ್ನುತ್ತ ನಡೆದರೇ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ “ಗ್ಯಾರಂಟಿ” ಅಳಿದು ಹೋಗತ್ತೆ ಎಂದು ಮಾಜಿ ಸಚಿವರು ಹೇಳಿದ್ದಾರೆ.