ಧಾರವಾಡ: ನೀರು ಎಂದು ತಿಳಿದು ವಿದ್ಯಾರ್ಥಿ ಓರ್ವ ಆಸಿಡ್ ಕುಡಿದ ಘಟನೆ ಧಾರವಾಡ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡದ ಗಾಂಧಿನಗರದ ಸರ್ಕಾರಿ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ.ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯವಾಗಿದ್ದು, ಕಳೆದ ಜೂನ್ 30 ರಂದು ಹಾಸ್ಟೇಲ್ ನಲ್ಲಿ ಬಾಟಲ್ ನಲ್ಲಿ ಆಸಿಡ್ ತುಂಬಿ ಇಟ್ಟಾಗ ನೀರು ಎಂದು ತಿಳಿದು ವಿದ್ಯಾರ್ಥಿ ಕುಡಿದ್ದಾನೆ. ಆಸಿಡ್ ಕುಡಿದಿದ್ದು ಕುಬೇರ್ ಲಮಾಣಿ ಎಂಬ ವಿದ್ಯಾರ್ಥಿಯಾಗಿದ್ದು. ವಿಜಯನಗರದ ಹುವಿನಹಡಗಲಿಯ ಮೈಲಾರ ಗ್ರಾಮದ ವಿದ್ಯಾರ್ಥಿಯಾಗಿದ್ದು.

ಧಾರವಾಡ ಅಂಜುಮನ್ ಕಾಲೇಜಿನಲ್ಲಿ ಬಿಎ ಪದವಿ ಕಲಿಯುತ್ತಿರುವ ವಿದ್ಯಾರ್ಥಿ, ಸದ್ಯ ಈ ಉವಕನನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ರವಾಣಿಸಲಾಗಿದೆ. ಈ ಘಟನೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.